2020ರಲ್ಲಿ ಕೋವಿಡ್ ಸಂಧರ್ಭದಲ್ಲಿ ಆಮ್ಲಜನಕ ಮಹತ್ವ ಏನೆಂಬುದು ನಮಗೆ ಈಗಾಗಲೇ ಅರಿವಾಗಿದೆ. ಭವಿಷ್ಯದಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡದಿದ್ದರೆ ಆಮ್ಲಜನಕ ನಿತ್ಯ ಖರೀದಿಸಿ ಬದುಕಬೇಕಾದ ಕಾಲ ಬಂದರು ಅಚ್ಚರಿ ಇಲ್ಲ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹಮ್ಮದ್ ಜಾಫರ್ ಸಾಧಿಕ್ ತಿಳಿಸಿದರು. ತಾಲೂಕಿನ ಹಳ್ಳಿಖೇಡ್(ಬಿ) ಪಟ್ಟಣದ ಜ್ಞಾನೋದಯವೇಂದ್ರ ಶಾಲೆಯಲ್ಲಿ ಗುರುವಾರ ಸಂಜೆ 4ಕ್ಕೆ ಆಯೋಜಿಸಿದ ವಲಯ ಮಟ್ಟದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.