೧೨ ದಿನಗಳ ನಂತರ ಪ್ರತಿಭಟನಾ ಸ್ಥಳಕ್ಕೆ ಸಿಇಓ ಭೇಟಿ ಮುಳಬಾಗಿಲು : ನಗರದ ತಾ.ಪಂ ಆವರಣದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಎಸ್ಸಿ ಎಸ್ಟಿ ಅನುದಾನಗಳ ದುರ್ಬಳಕೆ ಬಗ್ಗೆ ದಸಂಸ ಸಂಯೋಜಕ ಹಾಗೂ ರೈತ ಮಿತ್ರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ ೧೨ ದಿನಗಳ ನಂತರ ಜಿಲ್ಲಾ ಪಂಚಾಯತ್ ಸಿಇಓ ಪ್ರವೀಣ್ ಬಾಗೇವಾಡಿ ಭೇಟಿ ನೀಡಿ ತಪ್ಪು ಯಾರೇ ಮಾಡಿದ್ದರು ಕಾನೂನಿನ ಅಡಿಯಲ್ಲಿ ಅವರಿಗೆ ಶಿಕ್ಷೆಯಾಗುತ್ತದೆ ಹಾಗಾಗಿ ಪ್ರತಿಭಟನೆ ಹಿಂಪಡೆಯಲು ಮಾಡಿದ ಮನವಿಗೆ ಪ್ರತಿಭಟನಾಕಾರರು ಒಪ್ಪದ ಕಾರಣ ವಾಪಸ್ಸು ಮರಳಿದ ಘಟನೆ ನಡೆಯಿತು.