ಶಿರಹಟ್ಟಿ: ತಾಲೂಕಿನ ಬಸಾಪುರ, ರಾಮಗೇರಿ ,ಶಿಗ್ಲಿ ,ಸೂರಣಗಿ ,
ಬಾಲೆಹೊಸೂರು, ಗ್ರಾಮಗಳಲ್ಲಿ ಮತಯಾಚಿಸಿದ ಬಸವರಾಜ್ ಬೊಮ್ಮಾಯಿ
ಲೋಕಸಭಾ ಚುನಾವಣೆ ಹಿನ್ನೆಲೆ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಾಲೂಕಿನ ಬಸಾಪುರ ರಾಮಗೇರಿ, ಶಗ್ಲಿ, ಸೂರಣಗಿ ,ಬಾಲೆಹೊಸೂರು, ಗ್ರಾಮಗಳಿಗೆ ಸೋಮವಾರ ಮದ್ಯಾನ್ಹ 03 ಕ್ಕೆತೆರಳಿ ಮತಯಾಚಿಸಿದರು ಶಿಗ್ಲಿ ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ್ ಬೊಮ್ಮಾಯಿ ಯವರು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿಯವರ ಕಾರ್ಯವನ್ನು ನೋಡಿ ಮತ್ತೆ ಮತ್ತೊಮ್ಮೆ ಅವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡಲು ಬಿಜೆಪಿಗೆ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿದರು.