ಮೈಸೂರು: ಪತ್ನಿ ಬಗ್ಗೆ ಕೆಟ್ಟ ಪದ ಬಳಕೆ ಸ್ನೇಹಿತ ಮರ್ಡರ್ ಇಬ್ಬರ ವಿರುದ್ದ ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Mysuru, Mysuru | Sep 19, 2025 ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸ್ನೇಹಿತನ ತಲೆ ಮೇಲೆ ಕಲ್ಲುಚಪ್ಪಡಿ ಎತ್ತಿಹಾಕಿ ಕೊಲೆ ಮಾಡಿದ ಘಟನೆ ಮೈಸೂರಿನ ಹಳೆ ಕೆಸರೆಯಲ್ಲಿ ನಡೆದಿದೆ.ನವೀನ್ ಕುಮಾರ್ (40) ಮೃತ ದುರ್ದೈವಿ.ಚಂದ್ರಶೇಖರ್ ಹಾಗೂ ಭರತ್ ಎಂಬುವರ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನ್ ಕುಮಾರ್,ಚಂದ್ರಶೇಖರ್ ಹಾಗೂ ಭರತ್ ಸ್ನೇಹಿತರು.ವೃತ್ತಯಲ್ಲಿ ಡ್ರೈವರ್ ಗಳು.ಮೂವರು ಎಣ್ಣೆ ಪಾರ್ಟಿ ನಡೆಸುತ್ತಿದ್ದಾಗ ಚಂದ್ರಶೇ ಖರ್ ಪತ್ನಿ ಬಗ್ಗೆ ನವೀನ್ ಕುಮಾರ್ ಕೆಟ್ಟದಾಗಿ ಮಾತನಾಡಿದ್ದಾನೆ.ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಚಂದ್ರಶೇಖರ್ ಸಮೀಪದಲ್ಲಿದ್ದ ಕಲ್ಲುಚೆಪ್ಪಡಿಯಿಂದ ನವೀನ್ ಕುಮಾರ್ ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದಾನೆ.