ಕಲಬುರಗಿ: ನಾವು ನ2 ರಂದೇ ಚಿತ್ತಾಪುರದಲ್ಲಿ ಪಥಸಂಚಲನ ಮಾಡ್ತಿವಿ: ನಗರದಲ್ಲಿ ಭಾರತೀಯ ದಲಿತ ಪ್ಯಾಂಥರ್ನಿಂದ ಡಿಸಿಗೆ ಮನವಿ ಸಲ್ಲಿಕೆ
ಕಲಬುರಗಿ : ನವೆಂಬರ್ 2 ರಂದು ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಆರ್ಎಸ್ಎಸ್ ಸಂಘಟನೆ ನಡೆಸಲು ಉದ್ದೇಶಿಸಲಾಗಿರೋ ಪಥಸಂಚಲನಕ್ಕೆ ಟಕ್ಕರ್ ಕೊಡಲು ಇದೀಗ ಮತ್ತೊಂದು ದಲಿತ ಸಂಘಟನೆ ಎಂಟ್ರಿಯಾಗಿದೆ. ನಾವು ನ2 ರಂದೇ ಚಿತ್ತಾಪುರದಲ್ಲಿ ಪಥಸಂಚಲನ ನಡೆಸೋದಾಗಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಅ22 ರಂದು ಬೆಳಗ್ಗೆ 11 ಗಂಟೆಗೆ ಡಿಸಿ ಬಿ ಫೌಜಿಯಾ ತರನ್ನುಮ್ ಅವರಿಗೆ ಮನವಿ ಸಲ್ಲಿಸಿವೆ.. ಸಂವಿಧಾನ ಪೀಠಿಕೆ, ಲಾಠಿ ಹಿಡಿದು ಮತ್ತು ನೀಲಿ ಶಾಲು ಧರಿಸಿ ಚಿತ್ತಾಪುರದಲ್ಲೆ ಪಥಸಂಚಲನ ನಡೆಸಲು ಅನುಮತಿ ಕೋರಿ ಡಿಸಿಗೆ ಭಾರತೀಯ ದಲಿತ ಪ್ಯಾಂಥರ್ ಮನವಿಯನ್ನ ಸಲ್ಲಿಸಿದೆ..