ಬೆಂಗಳೂರು ದಕ್ಷಿಣ: ಯಾವಾಗ, ಯಾರು ಸ್ಪರ್ಧೆ ಮಾಡ್ಬೇಕು ಎಂದು ಕುಮಾರಸ್ವಾಮಿ, ದೇವೇಗೌಡ್ರು ನಿರ್ಧಾರ ಮಾಡ್ತಾರೆ: ನಗರದಲ್ಲಿ ಸಾರಾ ಮಹೇಶ್
ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಬಳಿಕ ಮಾಜಿ ಸಚಿವ ಸಾರಾ ಮಹೇಶ್ ಅವರು ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪದ್ಮನಾಭನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಇವತ್ತು ಎರಡು ವಿಚಾರವಾಗಿ ಸಭೆ ಆಯಿತು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಪಕ್ಷ ಸಂಘಟನೆ, ಹಾಸನದಲ್ಲಿ ನಡೆಯಲಿರುವ ಸಮಾವೇಶದ ಬಗ್ಗೆ ಸುಧೀರ್ಘ ಚರ್ಚೆ ನಡೀತು. ದೇವೇಗೌಡರ ಜೊತೆ ಈ ಬಗ್ಗೆ ಚರ್ಚೆ ನಡೀತು. ಇನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಸಾರಾ ಮಹೇಶ್ ಸ್ಪರ್ಧೆ ವಿಚಾರಕ್ಕೆ ಮಾತನಾಡಿ, ಇನ್ನೂ ಎರಡು ವರ್ಷ ಚುನಾವಣೆ ಇದೆ. ಅಲ್ಲಿರುವ ಶಾಸಕರು ನಮ್ಮ ಜೊತೆ ಸಕ್ರಿಯವಾಗಿಲ್ಲ. ನನಗೆ ಕೃಷ್ಣರಾಜ ನಗರ ಜನರು ಮೂರು ಬಾರಿ ಆಯ್ಕೆ ಮಾಡಿ ಮಂತ್ರಿ ಮಾಡಿದಾರೆ. ಯಾವಾಗ ಯಾರು ಸ್ಪರ್ಧೆ ಮಾಡಬೇಕು ಅನ್ನೋದನ್ನ ಕುಮಾರಸ್ವಾಮಿ,