ನಗರದ ಯಡಿಯೂರಪ್ಪ ಮಾರ್ಗದಲ್ಲಿ ರಸ್ತೆ ಗುಂಡಿಗಳು ಬಿದ್ದಿದ್ದು ಗುಂಡಿಗಳನ್ನು ದುರಸ್ತಿ ಗೊಳಿಸಬೇಕು ಎಂದು ಹಲಗಾ ಗ್ರಾಮಸ್ಥರು ಮತ್ತು ವಕೀಲರು ಪ್ರತಿಭಟನೆ ನಡೆಸಿದರು. ಹಲಗಾ, ಬಸ್ತವಾಡ, ಅಲಾರವಾಡ, ಕಮಕಾರಟ್ಟಿ, ಕೋಳಿಕೊಪ್ಪ, ಕೊಂಡಸಕೊಪ್ಪಗೆ ತೆರಳುವ ಜನರಿಗೆ ಹದಗೆಟ್ಟ ಯಡಿಯೂರಪ್ಪ ಮಾರ್ಗದ ರಸ್ತೆ ತೊಂದರೆಯಾಗುತ್ತಿದೆ. ಈ ಕೂಡಲೇ ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಸೋಮವಾರ ಹಲಗಾ ಗ್ರಾಮಸ್ಥರು ಮತ್ತು ವಕೀಲರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು