ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರಿನ ವಾರ್ತಾ ಇಲಾಖೆಯ ಮುಖ್ಯ ಗೇಟ್ ಬಳಿ ಬುಧವಾರ ಬೆಳಗ್ಗೆ 11 ಗಂಟೆಗೆ ವಾಮಾಚಾರದ ನಿಂಬೆಹಣ್ಣು ಪತ್ತೆಯಾಗಿದೆ. ನಿಂಬೆಹಣ್ಣಿನ ನಾಲ್ಕೂ ಕಡೆ ಕಪ್ಪು ಬಣ್ಣದಿಂದ ಗೆರೆ ಎಳೆಯಲಾಗಿತ್ತು. ಸರ್ಕಾರಿ ಕಚೇರಿಗಳ ಎದುರೇ ಇಂತಹ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ.