ಆಕಾಶವಾಣಿ ರಾಯಚೂರು ಕೇಂದ್ರವು ಡಿಸೆಂಬರ್ 09ರ ಸಂಜೆ 6.51ರಿಂದ 7.34ರವರೆಗೆ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತಕ್ಕೆ ಪರ್ಯಾಯ ಬೆಳೆಪದ್ದತಿ ಮತ್ತು ಹಿಂಗಾರು ಬೆಳೆಗಳಲ್ಲಿ ಕೀಟಗಳ ನಿರ್ವಹಣೆ ಕುರಿತು ನೇರ ಫೋನ್-ಇನ್ ಕಾರ್ಯಕ್ರಮವನ್ನು ಪ್ರಸಾರ ನಡೆಯಲಿದೆ ಎಂದು ಸೋಮವಾರ 5 ಗಂಟೆಗೆ ಪತ್ರಿಕಾ ಹೇಳಿಕೆ ಮುಖಾಂತರ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಯಚೂರು ಕೃಷಿ ವಿವಿಯ ಬೇಸಾಯ ವಿಜ್ಞಾನಿಗಳಾದ ಡಾ.ಎಂ.ಎ.ಬಸವಣ್ಣೆಪ್ಪ ಮತ್ತು ಕೀಟ ವಿಜ್ಞಾನಿಗಳಾದ ಡಾ.ಶಿವಾನಂದ ಜಿ ಹಂಚಿನಾಳ ಅವರು ಭಾಗವಹಿಸಿ ರೈತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದರು.ಆಕಾಶವಾಣಿಯ ದೂರವಾಣಿ ಸಂಖ್ಯೆ 08532–295898 ಅಥವಾ 08532-200312 ಇವುಗಳಿಗೆ ಕರೆಮಾಡಿ ಪ್ರಶ್ನೆ ಕೇಳಬಹುದು ಎಂದು ತಿಳಿಸಿದ್ದಾರೆ.