ದಾಂಡೇಲಿ: ಕೆ.ಸಿ.ವೃತ್ತದಲ್ಲಿ ಅಟಲ್ ಅಭಿಮಾನಿ ಸಂಘಟನೆಯಿಂದ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಆಚರಣೆ
ದಾಂಡೇಲಿ : ನಗರದ ಅಟಲ್ ಅಭಿಮಾನಿ ಸಂಘಟನೆಯ ವತಿಯಿಂದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಗುರುವಾರ ಸಂಜೆ 6.30 ಗಂಟೆ ಸುಮಾರಿಗೆ ನಗರದ ಕೆ.ಸಿ.ವೃತ್ತದಲ್ಲಿ ಆಚರಿಸಲಾಯಿತು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ನ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಿ ಗೌರವ ನಮನವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷ ವಿಷ್ಣು ನಾಯರ, ಪ್ರಮುಖರಾದ ಗಂಗಾಧರ ಬಾಲ್ಕಿ. ಬಾಳಪ್ಪ ಕುಂಬಾರ. ಅನಂತ ನಾಯ್ಕ. ಕಾಶೀಮ್ ಸಾಬ್ ಹುನಗುಂದ. ಭೀಮಶಿ ನಾಯ್ಕ. ಬಸವರಾಜ ಇಳಿಗೇರ ಮುಂತಾದವರು ಉಪಸ್ಥಿತರಿದ್ದರು.