ಚಿತ್ರದುರ್ಗ: ಹೂವಿನ ಬಾಣದಂತೆ ವೈರಲ್ ಆದ ಹಾಡಿಗೆ ಚಿತ್ರದುರ್ಗದಲ್ಲಿ ನಟ ಅಹಿಂಸಾ ಚೇತನ್ ಪ್ರತಿಕ್ರಿಯೆ
ಬಿರುಗಾಳಿ ಚಿತ್ರದ ಹೂವಿನ ಬಾಣದಂತೆ ವೈರಲ್ ಆಗುತ್ತಿರುವ ಹಾಡಿನ ವಿಚಾರಕ್ಕೆ ಬುಧವಾರ ಮಧ್ಯಾಹ್ನ 1 ಗಂಟೆಗೆ ಚಿತ್ರದುರ್ಗದಲ್ಲಿ ನಟ ಅಹಿಂಸಾ ಚೇತನ್ ಹೇಳಿಕೆ ನೀಡಿದ್ದಾರೆ. ನಮ್ಮ ಬಿರುಗಾಳಿ ಸಿನಿಮಾದ ಹಾಡು ತುಂಭಾ ಟ್ರೇಂಡ್ ಆಗುತ್ತಿದೆ.ವಿಧ್ಯಾರ್ಥಿನಿ ಆ ಹಾಡು ಹಾಡಿದ ಕಾರಣಕ್ಕೆ, 16 ವರ್ಷಗಳ ಹಿಂದಿನ ಗೀತೆ ಈಗ ಟ್ರೇಂಡ್ ಆಗಿದೆ. ಅರ್ಜುನ್ ಜನ್ಯ ಆ ಸಿನಿಮಾದ ಹಾಡನ್ನ ಕಂಪೋಸ್ ಮಾಡಿದ್ದರು. ಬಹಳ ಮಂದಿಗೆ ಇವತ್ತು ಆ ಗೀತೆ ಇಷ್ಟ ಆಗುತ್ತಿದೆ , ತುಂಭಾ ಸಂತೋಷ ವಿಷಯ ಎಂದರು. ಅಲ್ಲದೆ ಸಂಗೀತಕ್ಕೆ ಯಾವುದೇ ಸಮಯ ಇಲ್ಲ, ಸಮಯವನ್ನೇ ಮೀರಿದ್ದು ಸಂಗೀತ. ಆ ಚಿತ್ರ ಬಂದಾಗ ವಿದ್ಯಾರ್ಥಿನಿ ಎರಡ್ಮೂರು ವರ್ಷದ ಬಾಲಕಿ ಇರ್ಬೋದು, ನಾವು ಕೂಡಾ ಮಲೆಷ್ಯಾದಲ್ಲಿ ಚಿತ್ರ ಶೂಟಿಂಗ್ ಮಾಡಿದ್ದು ಎಂದರು