ಕಲಬುರಗಿ : ದಿನಾಲೂ ಬಾರ್ಗೆ ಬಂದು ಫುಕ್ಸಟೆ ಕುಡಿಯುತ್ತಿದ್ದ ವ್ಯಕ್ತಿಗೆ ಹಣ ಕೇಳಿದ್ದಕ್ಕೆ ಬಾರ್ ಮ್ಯಾನೇಜರ್ ಮೇಲೆ ಮಾರಣಾಂತಿಕ ಹಲ್ಲೆ ಎಸಗಿರೋ ಘಟನೆ ಕಲಬುರಗಿ ನಗರದ ತ್ರೀಶೂಲ್ ಬಾರ್ & ರೆಸ್ಟೋರೆಂಟ್ನಲ್ಲಿ ನಡೆದಿದ್ದು, ಅ26 ರಂದು ರಾತ್ರಿ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ... ತ್ರೀಶೂಲ್ ಬಾರ್ & ರೆಸ್ಟೋರೆಂಟ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿರೋ ರಾಘವೇಂದ್ರ ಎಂಬುವರ ಮೇಲೆ ಅದೇ ಬಾರ್ಗೆ ಬರ್ತಿದ್ದ ಫಿಲ್ಟರ್ಬೆಡ್ ನಿವಾಸಿ ಅಭಿಷೇಕ್ ಎಂಬಾತ ಎಣ್ಣೆ ಪಡೆದಿದ್ದು, ಈ ವೇಳೆ ಹಣ ಕೇಳಿದ ಬಾರ್ ಮ್ಯಾನೇಜರ್ ರಾಘವೇಂದ್ರಗೆ ನೆಲಕ್ಕೆ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.. ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ