ಮುಳಬಾಗಿಲಿನಲ್ಲಿ ವಂದೇ ಮಾತರಂಗೆ ೧೫೦ ವರ್ಷ ಹಾಗೂ ಬಾಲ್ಯ ವಿವಾಹ ಮುಕ್ತ ಭಾರತ ಕುರಿತ ವಿಶೇಷ ಕಾರ್ಯಕ್ರಮ ಕೋಲಾರ : ನಮ್ಮ ರಾಷ್ಡ್ರೀಯ ಗೀತೆಯಾದ ವಂದೇ ಮಾತರಂ ಗೆ ಎಲ್ಲರೂ ಗೌರವ ಸಲ್ಲಿಸ ಬೇಕಾದ ಅಗತ್ಯವಿದೆ ಎಂದು ಮುಳಬಾಗಿಲು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆರ್.ರವಿಚಂದ್ರ ತಿಳಿಸಿದರು. ಮುಳಬಾಗಿಲು ಬಾಲಕಿಯರ ಪದವಿ ಪೂರ್ವ ಕಾಲೇಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಮುಳಬಾಗಿಲು ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ವಂದೇ ಮಾತರಂ ೧೫೦ನೇ ವರ್ಷಗಳ ಸ್ಮರಣಾರ್ಥ ಹಾಗೂ "ಬಾಲ್ಯ ವಿವಾಹ ಮುಕ್ತ ಭಾರತ" ವಿಶೇಷ ಕಾರ್ಯಕ್ರಮ ಗುರುವಾರ ಉದ್ಘಾಟನೆ ನೆರವೇರಿಸಿ