ಮೈಸೂರಿನಲ್ಲಿ ಟ್ಯಾಕ್ಸಿ ಚಾಲಕನ ಮೇಲೆ ಹಣಕ್ಕಾಗಿ ಮಾರಣಾಂತಿಕ ಹಲ್ಲೆ ನಡೆದಿದೆ. ತಡರಾತ್ರಿ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಿಂತಾಮಣಿ ಮೂಲದ ಚಾಲಕ ಪ್ರದೀಪ್ ಅವರನ್ನು ಮೈಸೂರು ಅರಮನೆ ಮೈದಾನದಿಂದ ಪಿಕ್ ಅಪ್ ಮಾಡಿಕೊಂಡು ಬಂದಿದ್ದ ಪ್ರಯಾಣಿಕ, 3500 ರೂ. ಬಾಡಿಗೆ ಮಾತನಾಡಿದ್ದ. ರಾತ್ರಿ 11.30ರ ಸುಮಾರಿಗೆ ಡ್ರಾಪ್ ಮಾಡುವ ಸ್ಥಳಕ್ಕೆ ಬಂದು ಹಣ ಕೇಳಿದಾಗ, ಆರೋಪಿ ಚಾಲಕನ ಹೊಟ್ಟೆ, ಕಣ್ಣು ಮತ್ತು ಕೈಗೆ ಚಾಕುವಿನಿಂದ ಬಲವಾಗಿ ಇರಿದು, ಕಾರ್ ಕೀ ಕಸಿದುಕೊಂಡು ಪರಾರಿಯಾಗಿದ್ದಾನೆ.