ಹನೂರು: ಲೊಕ್ಕನಹಳ್ಳಿ ಸಮೀಪ ಮಣ್ಣುಮುಕ್ಕ ಹಾವು
ಕಳ್ಳ ಸಾಗಣೆ: ಇಬ್ಬರು ಆರೋಪಿಗಳ ಬಂಧನ
ಹನೂರು, ತಾಲೂಕಿನ ಲೊಕ್ಕನಹಳ್ಳಿ ಸಮೀಪ ಅಕ್ರಮವಾಗಿ ಮಣ್ಣುಮುಕ್ಕ ಹಾವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯ ಸಂಚಾರಿ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಆಂಡಿಪಾಳ್ಯ ಗ್ರಾಮದ ರಮೇಶ್ (35) ಮತ್ತು ಕುಡೆವಾಳೆ ಗ್ರಾಮದ ಮುರುಗೇಶ್ (29) ಎಂದು ಗುರುತಿಸಲಾಗಿದೆ. ಇವರಿಬ್ಬರು ಕಾರಿನಲ್ಲಿ ಲೊಕ್ಕನಹಳ್ಳಿಯಿಂದ ಕೊಳ್ಳೇಗಾಲ ಕಡೆಗೆ ಕಾರಿನಲ್ಲಿ ಮಣ್ಣುಮುಕ್ಕ ಹಾವನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದರೆಂದು ಖಚಿತ ಮಾಹಿತಿ ಲಭಿಸಿದ್ದ ಹಿನ್ನೆಲೆಯಲ್ಲಿ, ಅರಣ್ಯ ಸಂಚಾರಿ ದಳದ ಇನ್ಸಪೆಕ್ಟರ್ ವಿಜಯರಾಜ್ ಅವರ ನೇತೃತ್ವದಲ್ಲಿ ಲೊಕ್ಕನಹಳ್ಳಿ ದೊಡ್ಡಸಂಪಿಗೇಶ್ವರಸ್ವಾಮಿ ದೇವಾಲಯದ ಬಳಿ ನಡೆಸಿದ ಧಾಳಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ