ಹನೂರು: ಅಸ್ತೂರು ಗ್ರಾಮದಲ್ಲಿ ಚಿರತೆ ದಾಳಿ: ರೈತ ಪಾರಾದರೂ ಒಂದು ಮೇಕೆಗೆ ಗಾಯ
ಅಸ್ತೂರು ಗ್ರಾಮದಲ್ಲಿ ಚಿರತೆ ದಾಳಿ: ರೈತ ಪಾರಾದರೂ ಒಂದು ಮೇಕೆಗೆ ಗಂಭೀರ ಗಾಯ ಹನೂರು ತಾಲ್ಲೂಕಿನ ಪೊನ್ನಾಚ್ಚಿ ಸಮೀಪದ ಅಸ್ತೂರು ಗ್ರಾಮದಲ್ಲಿ ಮೇಕೆ ಮೇಯಿಸುತ್ತಿದ್ದಾಗ ಚಿರತೆ ದಾಳಿ ನಡೆಸಿದ ಘಟನೆ ನಡೆದಿದೆ. ಈ ದಾಳಿಯಿಂದ ಒಂದು ಮೇಕೆಗೆ ಗಂಭೀರ ಗಾಯವಾಗಿದ್ದು, ರೈತನು ಪಾರಾಗಿದ್ದಾನೆ. ಅಸ್ತೂರು ಗ್ರಾಮದ ವೆಂಕಟರಾಜು ಎಂಬ ರೈತನು ಗ್ರಾಮದ ಹೊರವಲಯದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಗ, ಕಾಡಿನಿಂದ ಚಿರತೆ ಬಂದು ಆ ಸ್ಥಳಕ್ಕೆ ಬಂದಿದೆ. ಈ ಚಿರತೆ ರೈತನತ್ತ ಆಗಮಿಸಿ ದಾಳಿ ಮಾಡಲು ಮುಂದಾಗುತ್ತಿದ್ದಂತೆ ಆತ ಆ ಸ್ಥಳದಿಂದ ತಪ್ಪಿಸಿಕೊಂಡು ಪಾರಾಗಿದ್ದಾನೆ.ಆದರೆ, ಚಿರತೆ ಒಂದು ಮೇಕೆಯ ಮೇಲೆ ದಾಳಿ ನಡೆಸಿ ಗಾಗಗೊಳಿಸಿದೆ