ಹೊಸದುರ್ಗ ತಾಲ್ಲೂಕಿನ ಹಲವೆಡೆ ಬಾನುವಾರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದಾಗಿ ಬೆಸ್ಕಾಂ ಪ್ರಕಟಣೆ ನೀಡಿದೆ. ಶನಿವಾರ ಸಂಜೆ 5 ಗಂಟೆಗೆ ಈ ಬಗ್ಗೆ ಇಲಾಖೆ ಪ್ರಕಟಣೆ ನೀಡಿದ್ದು ಏರಿಯಲ್ ಬಂಚ್ ಕೇಬಲ್ ಕಾಮಗಾರಿ ನಿರ್ವಹಿಸುವುದರಿಂದ ಹೊಸದುರ್ಗ ಪಟ್ಟಣದ ಸಿದ್ದರಾಮನಗರ, ರಾಘವೇಂದ್ರ ಬಡಾವಣೆ, ಶಿವಲಿಂಗಪ್ಪ ಲೇಔಟ್, ಸಿದ್ದೇಶ್ವರ ಲೇಔಟ್, ಇಂಡಸ್ಟ್ರಿಯಲ್ ಏರಿಯ, ಕನಕ ಬಡಾವಣೆ, ಕಂಗುವಳ್ಳಿ ಮತ್ತು ಬೋಕಿಕೆರೆ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ವಿಧ್ಯುತ್ ವ್ಯತ್ಯಯ ಉಂಟಾಗಲಿದೆ