ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ 150 ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಭಾರತ ಸರ್ಕಾರದ ಯುವ ಮತ್ತು ಕ್ರೀಡಾ ಸಚಿವಾಲಯ ಆಯೋಜಿಸಲಾಗಿದ್ದ ಏಕತಾ ನಡಿಗೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗವಹಿಸಿದ್ದರು. ಶನಿವಾರ ಬೆಳಗ್ಗೆ 9 ಗಂಟೆಗೆ ನಡೆದ ಕಾರ್ಯಕ್ರಮದ ನಂತರ ಏಕತಾ ನಡಿಗೆಯನ್ನು ಹುಬ್ಬಳಿಯ ಕೆಎಲ್ಇ ಬಿ.ವಿ.ಬಿ ಕ್ಯಾಂಪಸ್ ನಿಂದ ತೋಳನಕೆರೆ ವರೆಗೆ ಸಾವಿರಾರು ಯುವಕರು, ಗಣ್ಯರೊಂದಿಗೆ ಹಮ್ಮಿಕೊಳ್ಳಲಾಗಿತ್ತು.