ಸಹೋದರ ರಾಮಣ್ಣ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪೊಲೀಸರು ನಿಯಮ ಬಾಹಿರ ಬಂಧನ ಮಾಡಿದ್ದೂ, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ರಾಮಣ್ಣ ಸಹೋದರಿ ಲಾಲಮ್ಮ ಅವರು ಶನಿವಾರ 11 ಗಂಟೆಗೆ ಪತ್ರಿಕಾ ಭವನದಲ್ಲಿ ಒತ್ತಾಯಿಸಿದ್ದಾರೆ. ಮಸ್ಕಿ ತಾಲೂಕಿನ ಮಟ್ಟೂರು ತಾಂಡಾದ ನಿವಾಸಿಗಳಾದ ರಾಮಪ್ಪ ಮತ್ತು ಅವರ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ತಾಂಡಾದ ಕೆಲವರು ಅಕ್ರಮಕೂಟ ರಚಿಸಿ ಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.