ಚಳ್ಳಕೆರೆ:-ತಾಲೂಕಿನ ಕಾಲುವೆಹಳ್ಳಿ ಗ್ರಾಮದ ಕೆ.ಜಿ ತಿಮ್ಮಪ್ಪ ಎನ್ನುವವರ ತೋಟದಲ್ಲಿ ಬಾವಿಗೆ ಆಕಸ್ಮಿಕವಾಗಿ ಎತ್ತು ಬಿದ್ದಿದೆ. ಎತ್ತು ಬಾವಿಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಾವಿಗೆ ಬಿದ್ದ ಎತ್ತನ್ನು ಮೇಲಕ್ಕೆತ್ತಲು ಸತತವಾಗಿ ಒಂದು ಗಂಟೆಗಳ ಕಾಲ ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಎತ್ತನ್ನು ಬಾವಿಯಿಂದ ಮೇಲೆಕ್ಕೆ ತರುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಸ್ಥಳೀಯ ಯುವಕರು ಯಶಸ್ವಿಯಾಗಿದ್ದಾರೆ.ಸಾವು ನೋವಿನಲ್ಲಿದ್ದ ಎತ್ತನ್ನು ರಕ್ಷಣೆ ಮಾಡಲಾಗಿದ್ದು ಸದ್ಯ ರೈತನ ಎತ್ತು ಚೇತರಿಕೆ ಕಾಣುತ್ತಿದೆ.