ದಾಂಡೇಲಿ: ವಿಶ್ವ ಹಿಂದೂ ಪರಿಷತ್ತಿನ ದಾಂಡೇಲಿ ಪ್ರಖಂಡದ ಅಧ್ಯಕ್ಷರಾಗಿ ಶ್ರೀನಾಥ ಪಾಸಲಕರ ಆಯ್ಕೆ
ದಾಂಡೇಲಿ : ವಿಶ್ವ ಹಿಂದೂ ಪರಿಷತ್ತಿನ ದಾಂಡೇಲಿ ಪ್ರಖಂಡದ ಅಧ್ಯಕ್ಷರಾಗಿ ಸ್ಥಳೀಯ ಬಸವೇಶ್ವರನಗರ ಶ್ರೀ ಅಂಬಾಭವಾನಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷರು ಹಾಗೂ ದಾಂಡೇಲಿ ಟ್ರಾನ್ಸ್ಪೋರ್ಟ್ ಆಪರೇಟರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯು ಆಗಿರುವ ಶ್ರೀನಾಥ ಪಾಸಲಕರ ಅವರು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಬುಧವಾರ ಸಂಜೆ 5:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಹತ್ತು ಹಲವು ಸಂಘಟನೆಗಳಲ್ಲಿ ಹಾಗೂ ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಶ್ರೀನಾಥ ಪಾಸಲಕರ ಅವರನ್ನು ಸಂಘಟನೆಯ ಪ್ರಮುಖರು ವಿಶ್ವ ಹಿಂದೂ ಪರಿಷತ್ತಿನ ದಾಂಡೇಲಿ ಪ್ರಖಂಡದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.