ಬಸವಕಲ್ಯಾಣ: ತುಂಬಿ ಹರಿದ ಸೇತುವೆ, ಕೊಚ್ಚಿ ಹೋದ ಜಾನುವಾರುಗಳು: ಜನವಾಡಾ ಗ್ರಾಮದ ಬಳಿ ಘಟನೆ, ಸೇತುವೆ ಎತ್ತರ ಹೆಚ್ಚಿಸಲು ಸ್ಥಳೀಯರ ಒತ್ತಾಯ #localissue
ಬಸವಕಲ್ಯಾಣ: ಭಾರಿ ಮಳೆಗೆ ತುಂಬಿ ಹರಿದ ಸೇತುವೆ ದಾಟಲು ಹೋದ ಮೂರು ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋದ ಪ್ರಸಂಗ ತಾಲೂಕಿನ ಜನವಾಡಾ ಗ್ರಾಮದ ಬಳಿ ಜರುಗಿದೆ. ಜನವಾಡಾ ಗ್ರಾಮದ ನಿವಾಸಿ ಶಾಂತಪ್ಪ ಸರಜವಳಗಾ ಅವರಿಗೆ ಸೇರಿದ 2 ಆಕಳು, ಒಂದು ಹೋರಿ ಕರು ನೀರಿನಲ್ಲಿ ಕೊಚ್ಚಿ ಹೋಗಿವೆ.