ರಾಯಚೂರು ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಭೂ ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಕಾನೂನಿನ ಸಲಹೆ ನೀಡಲು ಕಾನೂನು ಸಲಹೆಗಾರರನ್ನು ನೇಮಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಆದೇಶಗಳನ್ವಯ ಈ ಹಿಂದೆ ನೇಮಿಸಲಾದ ಕಾನೂನು ಸಲಹೆಗಾರರು ಹುದ್ದೆಗೆ ರಾಜೀನಾಮೆಯನ್ನು ನೀಡಿರುವುದರಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕಾನೂನು ಸಲಹೆಗಾರರ ಹುದ್ದೆಯು ಖಾಲಿ ಇರುತ್ತದೆ. ಷರತ್ತಿಗೊಳಪಟ್ಟು ಕಾನೂನು ಸಲಹೆಗಾರರಿಗೆ ಒಂದು ನಿರ್ದಿಷ್ಟ ಏಕರೂಪದ ಸಂಚಿತ ವೇತನವನ್ನು ನಿಗಧಿಪಡಿಸಿ ಅಂತಹ ವೇತನದ ಮೇರೆಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಲು ಅಸಕ್ತಿಯುಳ್ಳ ನಿವೃತ್ತ ಸರ್ಕಾರಿ ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ಷರತ್ತುಗಳನ್ವ