ನರಗುಂದ: ಪಟ್ಟಣದ ಹೊರ ವಲಯದಲ್ಲಿ ಏಪ್ರಿಲ್ 5ರಂದು ನಡೆದ ಅಪಘಾತಕ್ಕೆ ಟ್ವಿಷ್ಟ್, ಲಾರಿ ಚಾಲಕ ಬಂಧನ
Nargund, Gadag | Apr 12, 2025 ಪಟ್ಟಣದ ಹೊರ ವಲಯದಲ್ಲಿ ಏಪ್ರಿಲ್ 5ರಂದು ನಡೆದ ಅಪಘಾತಕ್ಕೆ ಟ್ವಿಸ್ಟ್ ಸಿಕ್ಕಿದೆ. ಢಾಬಾದಲ್ಲಿ ಊಟಕ್ಕೆ ತೆರೆಳಿದ ಲಾರಿ ಚಾಲಕ ಊಟ ಬೇಗ ನೀಡಿಲ್ಲ ಅಂತ ಮಾಲಿಕನ ಜೊತೆ ಜಗಳಕ್ಕೆ ಇಳಿದಿದ್ದ. ಇದನ್ನು ಬಿಡಿಸಲು ಹೋದ ಇಬ್ಬರು ವ್ಯಕ್ತಿಗಳಿಗೂ ಲಾರಿ ಚಾಲಕ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದ. ಇದರಿಂದ ಚಾಲಕನಿಗೆ ಧರ್ಮದೇಟು ನೀಡಲಾಗಿತ್ತು. ಇದರಿಂದ ಆಕ್ರೋಶಗೊಂಡ ಲಾರಿ ಚಾಲಕ ಊಟ ಮುಗಿಸಿ ತೆರಳುತ್ತಿದ್ದ ಇಬ್ಬರ ಮೇಲೆ ಲಾರಿ ಹಾಯಿಸಿದ್ದ. ಅದರಲ್ಲಿ ಶಿವಾನಂದ ಎನ್ನುವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದ. ಸದ್ದಾಂಗೆ ಗಂಭೀರ ಗಾಯವಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿ ಲಾರಿ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.