ಮೊಳಕಾಲ್ಮುರು: ಐತಿಹಾಸಿಕ ಪ್ರಸಿದ್ಧವಾದ ಬ್ರಹ್ಮಗಿರಿ ಬೆಟ್ಟದ ಸಿದ್ದೇಶ್ವರ ಸ್ವಾಮಿ ಮಠದಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶ್ರೀ ಸೋಮಶೇಖರ ಸ್ವಾಮೀಜಿಯ ಪರಮಪೂಜ್ಯ ಮರಿಕೊಟ್ಟೂರೇಶ್ವರ ದೇಶಿಕರು. ನಿಯೋಜಿತ ಉತ್ತರಧಿಕಾರಿಗಳು. ಜಗದ್ಗುರು ಕೊಟ್ಟೂರು ಶಾಖಾ ಮಠ ಶ್ರೀಧರಘಟ್ಟ ಹಾಗೂ ವೇದಬ್ರಹ್ಮ ಸಿದ್ದ ಬಸವರಾಜ ಸ್ವಾಮಿಗಳು ನೇತೃತ್ವದಲ್ಲಿ ಬೆಟ್ಟದ ಮೇಲೆ ಹಬ್ಬದ ನಿಮಿತ್ತ ನಾನಾ ಧಾರ್ಮಿಕ ಆಚರಣೆಗಳನ್ನು ಅನುಸರಿಸಲಾಯಿತು, ಪ್ರತಿ ವರ್ಷವೂ ಇಲ್ಲಿ ವಿಶೇಷವಾಗಿ ಅದ್ದೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುತ್ತಾರೆ, ಕಾರ್ಯಕ್ರಮಕ್ಕೆ ಅಶೋಕ ಸಿದ್ದಾಪುರ,ಕೋನಸಾಗರ, ರೋಪ್ಪ ಸೇರಿದಂತೆ ಹಲವು ಗ್ರಾಮಗಳಿಂದ ಆಗಮಿಸಿದ್ದರು.