ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಶಾರದಾ ಪೀಠಮ್ ಸಂಸ್ಥಾನದ ಜಗದ್ಗುರು ಶ್ರೀ ವಿಧು ಶೇಖರ ಭಾರತೀ ಶ್ರೀಗಳನ್ನು ಶುಕ್ಲ ಯಜುರ್ವೇದಿಯ ವಿಪ್ರೋತ್ಸವ ಸಮ್ಮೇಳನಕ್ಕೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಧಾರವಾಡ ನಗರದ ಯಾಲಕ್ಕಿ ಶೆಟ್ಟರ ಕಾಲೋನಿಯ ಶೃಂಗೇರಿ ಶಂಕರ ಮಠದಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಭಕ್ತರು ಶೋಭಾಯಾತ್ರೆ ನಡೆಸಿ ಶ್ರೀಗಳಿಗೆ ಭಕ್ತಿ ಸೇವೆ ಸಮರ್ಪಿಸಿದರು.