ಸಾಕರಸನಹಳ್ಳಿ ಗ್ರಾಮದಲ್ಲಿ ಆನೆ ದಾಳಿಗೆ ಬೆಳೆ ನಾಶ ರೈತರ ಕಂಗಾಲು ಬಂಗಾರಪೇಟೆ ಗಡಿ ಗ್ರಾಮಗಳಲ್ಲಿ ಮತ್ತೆ ಕಾಡಾನೆಗಳು ಕಾಣಿಸಿಕೊಳ್ಳುವ ಮೂಲಕ ಹಲವು ತಿಂಗಳುಗಳಿAದ ಆನೆಗಳ ಹಾವಳಿಯಿಲ್ಲದೆ ನೆಮ್ಮದಿಯಾಗಿದ್ದ ಗ್ರಾಮಸ್ಥರಿಗೆ ಮತ್ತೆ ಆತಂಕ ಶುರುವಾಗುವಂತೆ ಮಾಡಿದೆ. ತಾಲೂಕಿನ ದೋಣಿಮಡಗು ಗ್ರಾಮ ಪಂಚಾಯ್ತಿಯ ಸಾಕರಸನಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಮುಂಜಾನೆ ದಿಡೀರನೆ ಐದು ಕಾಡಾನೆಗಳು ಆಗಮಿಸಿ ರೈತರೊಬ್ಬರ ಟೊಮೇಟೊ ತೋಟಕ್ಕೆ ನುಗ್ಗಿ ಟೊಮೇಟೋ ಬೆಳೆಯನ್ನು ತುಳಿದು ನಾಶ ಮಾಡಿದೆ.ಗ್ರಾಮದ ಬಸಪ್ಪ ಎಂಬ ರೈತ ತನ್ನ ಹೊಲದಲ್ಲಿ ಹಾಕಿದ್ದ ಟೊಮೇಟೊ ಇನ್ನೇನು ಕಟಾವಿಗೆ ಬಂದಿದ್ದು ಮಂಗ