೧೫೦ ಕುಟುಂಬಗಳಿಗೆ ವಿನಾಕಾರಣ ತೊಂದರೆ ಕ್ರಮಕ್ಕೆ ಕಾಮಸಮುದ್ರ ಗ್ರಾಮಸ್ಥರ ಒತ್ತಾಯ ಮುರಳಿ ಎಂಬ ವ್ಯಕ್ತಿ ತನ್ನ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಸುಮಾರು ೪೦ ವರ್ಷಗಳಿಂದ ವಾಸವಿರುವ ಸುಮಾರು ೧೫೦ ಕುಟುಂಬಗಳಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆಂದು ಕಾಮಸಮುದ್ರ ಗ್ರಾಮಸ್ಥರು ಆರೋಪಿಸಿ ಪಂಚಾಯಿತಿ ಅಧ್ಯಕ್ಷ ಆದಿನಾರಾಯಣ್ ಕುಟ್ಟಿ ಹಾಗೂ ಪಿಡಿಓ ರವರುಗಳಿಗೆ ಸೋಮವಾರ ಮನವಿ ಪತ್ರವನ್ನು ನೀಡಿದ್ದಾರೆ. ಗ್ರಾಮದ ಸರ್ವೆ ನಂಬರ್ ೨೬ ರಲ್ಲಿ ೪ ಎಕರೆ ಜಾಗವಿದ್ದು ಸುಮಾರು ೧೫೦ಕ್ಕೂ ಹೆಚ್ಚು ಮನೆಗಳನ್ನು ಗ್ರಾಮಸ್ಥರು ನಿರ್ಮಾಣ ಮಾಡಿಕೊಂಡು ಪಂಚಾಯಿತಿಯಲ್ಲಿ ಇ ಖಾತೆ ಮಾಡಿಕೊಂಡಿದ್ದೇವೆ ಅದರಂತೆ ಕಂದಾಯ ಹಾಗೂ ನೀರಿನ