ಔರಾದ್: ರಾಶಿ ಮಾಡಲು ಕೂಡಿಟ್ಟ ಸೋಯಾ ಬಣವಿಗೆ ಬೆಂಕಿ:
ಅಪಾರ ಪ್ರಮಾಣದ ಬೆಳೆ ಹಾನಿ: ಜೋಜನಾ ಗ್ರಾಮದಲ್ಲಿ ಘಟನೆ
Aurad, Bidar | Oct 23, 2025 ರಾಶಿ ಮಾಡಲು ಕೂಡಿಟ್ಟ ಸೋಯಾ ಬಣವಿಗೆ ಬೆಂಕಿ: ಅಪಾರ ಪ್ರಮಾಣದ ಬೆಳೆ ಹಾನಿ : ಔರಾದ್ ತಾಲೂಕಿನ ಜೋಜನಾ ಗ್ರಾಮದಲ್ಲಿ ಗುರುವಾರ ಸಂಜೆ 8 ಗಂಟೆ ಸುಮಾರಿಗೆ ಜರುಗಿರುವ ಘಟನೆ ಔರಾದ್: ತಾಲೂಕಿನ ಜೋಜನಾ ಗ್ರಾಮದ ರೈತ ಹಣಮಂತ ತಂದೆ ಗಣಪತಿ ರಾಘೋಳೆ ಅವರಿಗೆ ಸೇರಿದ ರಾಶಿ ಮಾಡಲು ಕೂಡಿಟ್ಟ ಸೋಯಾ ಬಣವಿಗೆ ಯಾರೋ ಅಪರಿಚಿತ ದುಷ್ಕರ್ಮಿಗಳು ಗುರುವಾರ ಸಂಜೆ ಎಂಟರ ಸುಮಾರಿಗೆ ಬಣವಿಗೆ ಬೆಂಕಿ ಹಚ್ಚಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದು, 4 ಎಕರೆಯಲ್ಲಿ ಬೆಳೆದಿದ್ದ ಸುಮಾರು 30 ಕ್ವಿಂಟಲ್ ಗಳಿಗಿಂತಲೂ ಹೆಚ್ಚಿನ ಫಸಲು ಇರುವ ಸುಮಾರು ಒಂದು ಲಕ್ಷ ಐವತ್ತು ಸಾವಿರ ರೂಗಳ ಮೌಲ್ಯದ ಬೆಳೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.