ದಾಂಡೇಲಿ : ಬಡವರಿಗೆ ಸಾಲ ನೀಡುವಾಗ ಅನಗತ್ಯವಾಗಿ ಕಿರಿ ಮಾಡದಿರಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್. ವಿ. ದೇಶಪಾಂಡೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು. ದಾಂಡೇಲಿ ನಗರ ಸಭೆಯಲ್ಲಿ ಗುರುವಾರ ಮಧ್ಯಾಹ್ನ 12.30 ಗಂಟೆ ಸುಮಾರಿಗೆ ವಿವಿಧ ಬ್ಯಾಂಕ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಹೇಳಿದರು. ಆಶ್ರಯ ಮನೆ ಪಡೆಯುವ ಸಂದರ್ಭದಲ್ಲಿ ಫಲಾನುಭವಿಗಳು ಸಾಲ ಪಡೆಯುವಾಗ ಬ್ಯಾಂಕ್ ನಿಂದ ಆಗುತ್ತಿರುವ ವ್ಯತ್ಯಾಸಗಳ ಬಗ್ಗೆ ಆಕ್ಷೇಪ ಬಂದ ಹಿನ್ನಲೆಯಲ್ಲಿ ಅವರನ್ನು ಕರೆಯಿಸಿ ಸಭೆ ನಡೆಸಿ ವಿಚಾರಿಸಿದರು.