ದಾಂಡೇಲಿ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಶುಕ್ರವಾರ ಅಸ್ತಂಗತರಾದ ಹಿನ್ನಲೆಯಲ್ಲಿ ದಾಂಡೇಲಿಯ ಸೋಮಾನಿ ವೃತ್ತದಲ್ಲಿ ಅವರಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ವತಿಯಿಂದ ಶನಿವಾರ ಸಂಜೆ 5.30 ಗಂಟೆ ಸುಮಾರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ತಿಮ್ಮಕ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ರಾಜ್ಯ ಮಾನವ ಹಕ್ಕುಗಳ ನಿರ್ದೇಶಕರಾದ ಫೀರೋಜ್ ಪಿರಜಾದೆ ಮಾತನಾಡಿ ಲಕ್ಷಾಂತರ ಗಿಡ ಮರಗಳನ್ನು ನೆಟ್ಟು ತನ್ನ ಮಕ್ಕಳಂತೆ ಸಲುಹಿ ಬೆಳೆಸಿದ್ದ ತಿಮ್ಮಕ್ಕ ಅವರು ನಮ್ಮೆಲ್ಲರ ಪಾಲಿಗೆ ನಿಜವಾದ ವೃಕ್ಷಮಾತೆಯೆ ಆಗಿದ್ದಾರೆ ಎಂದರು.