ಹುಬ್ಬಳ್ಳಿ: ತಾಲೂಕಿನ ತಿರುಮಲಕೊಪ್ಪ ಕ್ರಾಸ್ ಬಳಿ ಬಸ್ ಪಲ್ಟಿಯಾಗಿ ಚಾಲಕ ಮೃತಪಟ್ಟು, ನಿರ್ವಾಹಕ ಮತ್ತು ಪ್ರಯಾಣಿಕರೊಬ್ಬರು ಗಾಯಗೊಂಡ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಅವಘಡದಲ್ಲಿ ಮೂಲತಃ ಹುನಗುಂದ ತಾಲೂಕ ಗೊರಜನಾಳದ ಬಾದಾಮಿ ನಿವಾಸಿ ಮಂಜು ಯಲ್ಲಪ್ಪ ಹಳ್ಳೊಳ್ಳಿ (38) ಮೃತಪಟ್ಟಿದ್ದಾರೆ. ನಿರ್ವಾಹಕ ಗದಗ ತಾಲೂಕ ಕಣವಿ ಹೊಸೂರನ ಮುತ್ತಪ್ಪ ಮುರಾರಿ ಹಾಗೂ ಪ್ರಯಾಣಿಕ ರಾಣಿಬೆನ್ನೂರಿನ ದೇವಿಂದ್ರಪ್ಪ ಬ್ಯಾಡಗಿ ಗಾಯಗೊಂಡಿದ್ದಾರೆ. ಬಸ್ ಚಾಲಕನು ಹಾವೇರಿಯಿಂದ ಹುಬ್ಬಳ್ಳಿ ಕಡೆಗೆ ವೇಗವಾಗಿ ಬರುತ್ತಿದ್ದಾಗ, ವಾಹನದ ಮೇಲಿನ ನಿಯಂತ್ರಣ ಕಳೆದುಕೊಡಾಗ ವಾಹನ ಪಲ್ಟಿಯಾಗಿ ಬಿದ್ದಾಗ ಮೂವರು ಗಂಭೀರ ಗಾಯಗೊಂಡಿದ್ದರು. ಕೆಎಂಸಿಆರ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ