ಗಾಂಜಾ ಎಲ್ಲಿ ಮಾರಾಟವಾಗುತ್ತೆ ಪೊಲೀಸರಿಗೆ ಗೊತ್ತು, ಫೋನ್ ಪೇ ಮೂಲಕ ಮಾಮೂಲು ಪಡಿತಾರೆ ಪೊಲೀಸರು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅಚ್ಚರಿ ಹೇಳಿಕೆ. ಸಿಂಧನೂರು ನಗರ ಮತ್ತು ತಾಲೂಕಿನಲ್ಲಿ ಗಾಂಜಾ ಮತ್ತು ಡ್ರಗ್ಸ್ ಹಾವಳಿ ಮಿತಿಮೀರಿ ಹೋಗಿದೆ. ಎಲ್ಲಿ ಗಾಂಜಾ ಡ್ರಗ್ಸ್ ಮಾರಾಟ ಆಗುತ್ತೆ ಅಂತ ಪೊಲೀಸರಿಗೆ ಗೊತ್ತಿದೆ ಆದರೆ ಕ್ರಮ ಕೈಗೊಳ್ಳುತ್ತಿಲ್ಲ ಬದಲಿಗೆ ಫೋನ್ ಪೇ ಮೂಲಕ ಮಾಮೂಲು ಹೊಡೆಯುತ್ತಿದ್ದಾರೆ, ಅಂತ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಬಹಿರಂಗವಾಗಿ ಆರೋಪಿಸಿದ್ದಾರೆ.