“ಸಾರ್ವಜನಿಕ ಶಿಕ್ಷಣ ಉಳಿಸಿ, ಹಾಸ್ಟೆಲ್ ಬಲಪಡಿಸಿ” ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿ ಈ ದುರಿತ ಕಾಲದಲ್ಲಿ ಎಸ್.ಎಫ್.ಐ ರಾಜ್ಯ ಸಮಿತಿ ರಾಜ್ಯಾದ್ಯಂತ “ಸಾರ್ವಜನಿಕ ಶಿಕ್ಷಣ ಉಳಿಸಿ, ಹಾಸ್ಟೆಲ್ ಬಲಪಡಿಸಿ” ಎಂಬ ಘೋಷವಾಕ್ಯದಡಿಯಲ್ಲಿ ದಿನಾಂಕ: ೧೨.೧೦.೨೦೨೫ ರಿಂದ ದಾವಣಗೆರೆಯಲ್ಲಿ ಉದ್ಘಾಟನೆಗೊಂಡು ದಿನಾಂಕ: ೨೮.೧೦.೨೦೨೫ರ ವರೆಗೆ ರಾಜ್ಯದಾದ್ಯಂತ ಶೈಕ್ಷಣಿಕ ಜಾಥಾವನ್ನು ಕೈಗೊಂಡಿದೆ. ಹಾಗೂ ದಿನಾಂಕ: ೨೯ ಮತ್ತು ೩೦ ಅಕ್ಟೋಬರ್ ೨೦೨೫ರಂದು ಎರಡು ದಿನಗಳಕಾಲ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯಮಟ್ಟದ ಸಮಾವೇಶವನ್ನು ಹಾವೇರಿಯ ಗುರುಭವನದಲ್ಲಿ ಜರುಗಲಿದೆ. ಶೈಕ್ಷಣಿಕ ಜಾಥ ಮತ್ತು ಸಮಾವೇಶದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಸಾಹಿತಿಗಳು, ಚಿಂತಕರು ಹಾಗೂ ಶಿಕ್ಷಣ ಪ್ರೇಮಿಗಳು ಭಾಗಿಯಾಗಲಿದ್ದಾರೆ