ಕಲಬುರಗಿ : ಕಬ್ಬು ಬೆಳೆಗಾರರ ಸಂರಕ್ಷಣೆಗಾಗಿ ಕಬ್ಬಿಗೆ ಏಕರೂಪ ದರ ನಿಗದಿ, ಸಕ್ಕರೆ ಇಳುವರಿಯಲ್ಲಿ ಅನ್ಯಾಯ, ತೂಕದಲ್ಲಿ ಮೋಸ, ಕೆಎಮ್ಎಫ್ ಮಾದರಿಯಲ್ಲಿ ತೊಗರಿ ಖರೀಧಿ ಕೇಂದ್ರ ಸ್ಥಾಪನೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 9 ರಂದು ಕಲಬುರಗಿ ಡಿಸಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಹೋರಾಟಗಾರ ಮಹಾಂತಗೌಡ ನಂದಿಹಳ್ಳಿ ಹೇಳಿದ್ದಾರೆ.. ಡಿ7 ರಂದು ಮಧ್ಯಾನ 12 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಬೆಳೆ ಚೆನ್ನಾಗಿ ಬೆಳೆದರು ಸಹ ಸೂಕ್ತ ಬೆಲೆ ಸಿಗದೆ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆಂದು ಮಹಾಂತಗೌಡ ನಂದಿಹಳ್ಳಿ ಹೇಳಿದರು.