ಜೋಯಿಡಾ : ತಾಲೂಕಿನ ರಾಮನಗರದ ಶ್ರೀ ರಾಮಲಿಂಗ ದೇವಸ್ಥಾನದ ಮೈದಾನದಲ್ಲಿ ಜಗದ್ಗುರು ರಾಮಾನಂದಾಚಾರ್ಯ ದಕ್ಷಿಣಪೀಠ ನಾನಿಜಧಾಮದ ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಸ್ವಾಮಿಜಿಗಳ ಪಾದುಕಾ ದರ್ಶನ ಕಾರ್ಯಕ್ರಮವು ಬುಧವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುನೀಲ ಹೆಗಡೆ ಭಾಗವಹಿಸಿ ಪಾದುಕಾ ದರ್ಶನ ಮಾಡಿ ಆಶೀರ್ವಾದ ಪಡೆದುಕೊಂಡರು.