ಯಲ್ಲಾಪುರ:ಪಟ್ಟಣದ ಗ್ರಾಮದೇವಿಯರ ಜಾತ್ರೆಯ ನಿಮಿತ್ತ ಹೊರಬೀಡು ಆಚರಣೆಯಿಂದಾಗಿ ಜನ ಸಂಚಾರ ಸ್ಥಗಿತಗೊಂಡಿತ್ತು.ಫೆ.11 ರಂದು ಜಾತ್ರೆ ನಿಮಿತ್ಯ 3 ಹೊರ ಮಂಗಳವಾರ (ಹೊರಬೀಡು) ಆಚರಣೆ ಯಿಂದಾಗಿ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಜ.20 ಮಂಗಳವಾರ ಮೊದಲನೇ ಹೊರಬೀಡು ದಿನ ಎಲ್ಲಾ ಜಾತಿಯ ಧರ್ಮದವರು ತಮ್ಮ ವ್ಯಾಪಾರ, ವ್ಯವಹಾರಗಳನ್ನು ಬದಿಗಿಟ್ಟು ಬೆಳಿಗ್ಗೆ 10 ರಿಂದ ಪಟ್ಟಣದ ಉದ್ಯಾನವನ,ಹೊರವಲಯದ ತೋಟಗಳಿಗೆ ಹೋಗುವ ದೃಶ್ಯ ಕಂಡು ಬಂದಿತು.