ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ. 25ರ ರಾತ್ರಿ 11.30ರ ಸುಮಾರಿಗೆ ಕಾರ್ ಮಿರರ್ಗೆ ಬೈಕ್ ತಗುಲಿ ಒಡೆದುಹೋಗಿದ್ದಕ್ಕೆ, ಕೋಪಗೊಂಡ ಕಾರು ಚಾಲಕ ಬೈಕ್ನಲ್ಲಿದ್ದ ಯುವಕರನ್ನು ಸುಮಾರು 2 ಕಿ.ಮೀ. ಅಟ್ಟಿಸಿಕೊಂಡು ಬಂದು ಕಾರಿನಿಂದ ಗುದ್ದಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಜೆ.ಪಿ. ನಗರ ಸಂಚಾರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಪೊಲೀಸ್ ತನಿಖೆಯಲ್ಲಿ ಇದು ಕೊಲೆ ಎಂಬುದು ದೃಢಪಟ್ಟಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಲ್ಲಿದ್ದ ದರ್ಶನ್ ಮತ್ತು ವರುಣ್ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ದರ್ಶನ್ ಸಾವನ್ನಪ್ಪಿದ್ದಾನೆ.