ಶಿರಸಿ: ಮತ್ತೀಘಟ್ಟಾ ಜಲತಾಪದಲ್ಲಿ ಮೃತಪಟ್ಟ ಉಂಚಳ್ಳಿಯ ಯುವಕನ ಕುಟುಂಬಕ್ಕೆ ೫ ಲಕ್ಷ ರೂ ವಿತರಿಸಿದ ಶಾಸಕ ಹೆಬ್ಬಾರ್
ಶಿರಸಿ : ಇತ್ತೀಚೆಗೆ ಮತ್ತಿಘಟ್ಟ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟ ತಾಲೂಕಿನ ಉಂಚಳ್ಳಿಯ ಪವನ ಜೋಗಿ ಕುಟುಂಬಕ್ಕೆ ೫ ಲಕ್ಷ ರೂ. ಪರಿಹಾರ ಮಂಜೂರಾಗಿದ್ದು, ಶಾಸಕ ಶಿವರಾಮ ಹೆಬ್ಬಾರ್ ಶುಕ್ರವಾರ ಮೃತನ ಮನೆಗೆ ತೆರಳಿ ಆದೇಶ ಪ್ರತಿಯನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಶಿವರಾಮ ಹೆಬ್ಬಾರ್, ಕುಟುಂಬಕ್ಕೆ ನೆರವಾಗಬೇಕಿದ್ದ ಯುವಕ ಇಂತಹ ದುರ್ಘಟನೆಯಲ್ಲಿ ಸಿಲುಕಿರುವುದು ನೋವು ತಂದಿದೆ. ನಾವು ಸಹಾಯ ನೀಡಿದರೂ ಮೃತರನ್ನು ವಾಪಸ್ ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಪರಿಹಾರದ ಹಣ ಶೀಘ್ರವೇ ಬ್ಯಾಂಕ್ ಖಾತೆಗೆ ಜಮಾ ಆಗಲಿದ್ದು, ಸಂಕಷ್ಟದಲ್ಲಿರುವ ಕುಟುಂಬ ಆರ್ಥಿಕವಾಗಿ ಮೇಲೆ ಬರಲಿ ಎಂದರು.