ಕಲಬುರಗಿ: ನ2 ರಂದೇ ಪಥಸಂಚಲನಕ್ಕೆ ಅನುಮತಿ ಸಿಕ್ಕಿಲ್ಲವೆಂದ್ರೆ ದಂಗೆ ಎಳ್ತಿವಿ: ನಗರದಲ್ಲಿ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಎಸ್ ಎಸ್ ತಾವಡೆ ಎಚ್ಚರಿಕೆ
ಕಲಬುರಗಿ : ನವೆಂಬರ್ 2 ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಡಿಸಿಗೆ ಆರ್ಎಸ್ಎಸ್ ಮನವಿ ಸಲ್ಲಿಸಿದ್ದು, ನಮಗೂ ಅಂದೇ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅನುಮತಿ ನೀಡಬೇಕು.. ಇಲ್ಲವಾದಲ್ಲಿ ದಂಗೆ ಎಳ್ತಿವಿ ಅಂತಾ ಭೀಮ್ ಆರ್ಮಿ ಸಂಘಟನೆ ರಾಜ್ಯಾಧ್ಯಕ್ಷ ಎಸ್ ಎಸ್ ತಾವಡೆ ಎಚ್ಚರಿಕೆ ನೀಡಿದ್ದಾರೆ.. ಅ21 ರಂದು ಮಧ್ಯಾನ 3 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ನೊಂದಣಿ ಇಲ್ಲದ ಸಂಘಟನೆಗೆ ಒಂದು ವೇಳೆ ಕೋರ್ಟ್ ಅನುಮತಿ ನೀಡಿದ್ರೆ ತಪ್ಪಾಗುತ್ತೆ.. ಅದ್ಯಾಕೇ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲೆ ಆರ್ಎಸ್ಎಸ್ ಪಥಸಂಚಲನ ನಡೆಸಲು ಮುಂದಾಗಿದೆ ಅಂತಾ ತಾವಡೆ ಪ್ರಶ್ನಿಸಿದ್ದಾರೆ..