ಜೋಯಿಡಾ : ಯಾವುದೇ ಊರಿನವರು ಇರಲಿ, ಯಾವುದೇ ದೇಶದವರು ಇರಲಿ, ಒಂಟಿ ಮಹಿಳೆ ರಾತ್ರಿ ವೇಳೆಯಲ್ಲಿ ರಸ್ತೆ ಬದಿಯಲ್ಲಿ ಗೊತ್ತು ಗುರಿ ಇಲ್ಲದೇ ನೆರವಿಗಾಗಿ ಕಾಯುತ್ತಿರುವಾಗ ಸ್ಪಂದಿಸುವುದು ನಿಜವಾದ ಮಾನವೀಯ ಧರ್ಮ. ಅದಕ್ಕಿಂತಲೂ ಮುಖ್ಯವಾಗಿ ಮಹಿಳೆಯನ್ನು ಪೂಜ್ಯ ಭಾವನೆಯಿಂದ ನೋಡುವ ಸಂಸ್ಕೃತಿ ನಮ್ಮ ರಾಷ್ಟ್ರದ್ದು, ಪ್ರವಾಸಕ್ಕೆಂದು ಬಂದು ಉಳಿದುಕೊಳ್ಳಲು ಎಲ್ಲಿಯೂ ವ್ಯವಸ್ಥೆಯಾಗದೆ ರಾತ್ರಿ ಹೊತ್ತಿನಲ್ಲಿ ನೆರವಿಗಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಪೋಲೆಂಡ್ ದೇಶದಿಂದ ಬಂದಿದ್ದ ಒಂಟಿ ಮಹಿಳೆಗೆ ಆಶ್ರಯ ನೀಡುವ ಮೂಲಕ ಸನಾತನ ಧರ್ಮದಂತೆ ಮಹಿಳೆಯನ್ನು ಪೂಜ್ಯ ಭಾವನೆಯಿಂದ ನೋಡುವ ಮೂಲಕ ತಾಲೂಕಿನ .ಕುಣಗಿನಿಯ ಜೈ ಸಂತೋಷಿ ಮಾತಾ ಜೈ ಕಾಳಿಕಾ ಮಾತಾ ಮಂದಿರದ ಶ್ರೀ ರಘುವೀರ ಸ್ವಾಮೀಜಿಯವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ.