ದಾಂಡೇಲಿ : ನಮ್ಮ ದೇಶದಲ್ಲಿ ಈವರೆಗೆ ಭಾಷಾ ನೀತಿ ಅಳವಡಿಸದ ಕಾರಣ ಇಲ್ಲಿರುವ ಭಾಷೆಗಳನ್ನು ಉಳಿಸಿ ಕೊಳ್ಳುವುದು ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಭಾಷಾ ನೀತಿ ಜಾರಿಯಾಗಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ನಗರದ ಹಳೆ ನಗರ ಸಭೆಯ ಮೈದಾನದಲ್ಲಿ ನಡೆಯುತ್ತಿರುವ 25 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಸೋಮವಾರ ನಡೆದ ನುಡಿ-ಗಡಿ-ಬರಹ : ಸಮಸ್ಯೆ-ಸವಾಲು-ಪರಿಹಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತನಾಡುತ್ತಿದ್ದರು. ಹಿಂದಿ ಭಾಷೆಗೆ ಸಂವಿಧಾನದ ಬೆಂಬಲವಿದೆ. ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ 30 ಜನರ ಬಲಿಷ್ಠ ಸಮಿತಿ ಇದೆ ಎಂದರು.