ಮೈಸೂರು: ದಸರಾ ಆಚರಣೆ ಸಂಬಂಧ ಚಾಮುಂಡಿ ಬೆಟ್ಟದಲ್ಲಿ ಕೃಷ್ಣರಾಜ ಪೊಲೀಸ್ ಠಾಣೆಯ ಕ್ಷಿಪ್ರ ಕಾರ್ಯ ಪಡೆಯ ಪಥಸಂಚಲನ
Mysuru, Mysuru | Sep 20, 2025 ಇಂದು ಚಾಮುಂಡಿ ಬೆಟ್ಟದಲ್ಲಿ ಮೈಸೂರು ದಸರಾ-2025ರ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದ್ದು ಬೆಟ್ಟಕ್ಕೆ ಗಣ್ಯ ವ್ಯಕ್ತಿಗಳು, ಪ್ರವಾಸಿಗರು & ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು & ಸುವ್ಯವಸ್ಥೆ ಕಾಪಾಡಲು, ಮತ್ತು ಸಮಾಜ ಘಾತುಕ ವ್ಯಕ್ತಿಯಗಳ ಮೇಲೆ ನಿಗಾವಹಿಸುವ ದೃಷ್ಟಿಯಿಂದ ಈ ದಿನ ಕೃಷ್ಣರಾಜ ಪೊಲೀಸ್ ಠಾಣೆಯ ಅಧಿಕಾರಿಗಳು, ಕ್ಷಿಪ್ರ ಕಾರ್ಯ ಪಡೆ (RAF) ತುಕಡಿ & ಪೊಲೀಸ್ ಸಿಬ್ಬಂದಿಗಳು ಚಾಮುಂಡಿ ಬೆಟ್ಟ ಮತ್ತು ಸುತ್ತಲ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದರು.