ಬೆಂಗಳೂರು ಉತ್ತರ: ಧರ್ಮಸ್ಥಳ ವಿಚಾರದಲ್ಲಿ ಯಾರು ಷಡ್ಯಂತ್ರ ಮಾಡಿದ್ರು? ಸರ್ಕಾರ ಉತ್ತರಿಸಬೇಕು: ನಗರದಲ್ಲಿ ಶಾಸಕ ಭರತ್ ಶೆಟ್ಟಿ
ಬಿಜೆಪಿ ಶಾಸಕ ಭರತ್ ಶೆಟ್ಟಿ ಅವರು ಧರ್ಮಸ್ಥಳ ವಿಚಾರವಾಗಿ ವಿಧಾನಸೌಧದಲ್ಲಿ ಮಂಗಳವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ತರಾತುರಿಯಲ್ಲಿ ಸರ್ಕಾರ ಎಸ್ ಐಟಿ ರಚನೆ ಏಕೆ ಮಾಡಿದ್ರು..? ಕೇರಳ ವಿಧಾನಸಭೆಯಲ್ಲಿ ಧರ್ಮಸ್ಥಳ ವಿಚಾರ ಚರ್ಚೆ ಆಗುತ್ತದೆ. ಸೋಮುವಾರ ಸ್ಥಳೀಯ ಎಸ್ ಐ ಮಂಪರು ಪರೀಕ್ಷೆಗೆ ಸಿದ್ದತೆ ನಡೆಸಿರ್ತಾರೆ. ಭಾನುವಾರ ಐಸ್ ಐಟಿ ರಚನೆ ಮಾಡುತ್ತಾರೆ.. ನೆನ್ನೆ ನಮ್ಮ ಗೃಹ ಸಚಿವರು ಸದನದಲ್ಲಿ ಸಮರ್ಪಕ ಉತ್ತರ ನೀಡಿಲ್ಲ. ಷಡ್ಯಂತ್ರ ಮಾಡಿದ್ದು ಯಾರು ಎಂಬ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದರು.