ಚಳ್ಳಕೆರೆ: ತಾಲ್ಲೂಕಿನ ದೊಡ್ಡರಿ ಗೊಲ್ಲರಟ್ಟಿ ಗ್ರಾಮದ ಸಿರಿಯಣ್ಣ ರವರ ಕಣದ ಬಳಿ ನಡೆಯುತ್ತಿದ್ದ ಇಸ್ಪೀಟು ಅಡ್ಡೆಯ ಮೇಲೆ ನವಂಬರ್ ನಾಲಕ್ಕರಂದು ಪೊಲೀಸರು ದಾಳಿ ನಡೆಸಿದ್ದು, ಮಧುಸೂದನ್ ಸೇರಿದಂತೆ ಇತರೆ 4ಕ್ಕ ಜನರನ್ನು ಬಂಧಿಸಿ, ₹ 8800 ನಗದು ಹಾಗೂ ಇಸ್ಪೀಟು ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದೊಡ್ಡರಿ ಗೊಲ್ಲರಟ್ಟಿ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಗುಂಪು ಕಟ್ಟಿಕೊಂಡು ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಡಿವೈಎಸ್ಪಿ ಡಿ.ಸತ್ಯನಾರಾಯಣರಾವ್ ಅವರಿಗೆ ಲಭಿಸಿತ್ತು. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸ್ಪೆಕ್ಟರ್ ಕೆ.ಕುಮಾರ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿತು. ಈ ದಾಳಿ ವೇಳೆ, ಇಸ್ಪೀಟ್ ಆಟದಲ್ಲಿ ತೊಡಗಿದ್ದ ಐದು ಜನರನ್ನು ಬಂಧಿಸಲಾಗಿದೆ.