ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಪ್ರಾಯೋಜಕತ್ವದಲ್ಲಿ ರಂಗನಾಥ ಸಭಾಂಗಣದಲ್ಲಿ ನಡೆದ 'ಸುಮಧುರ ಸಂಜೆ' ಹಾಗೂ 'ಯಕ್ಷನೃತ್ಯ' ಕಾರ್ಯಕ್ರಮವು ಯಶಸ್ವಿಯಾಗಿ ಭಾನುವಾರ ರಾತ್ರಿ 9.30 ಗಂಟೆ ಸುಮಾರಿಗೆ ಸಂಪನ್ನಗೊಂಡಿತು. ಆರಂಭದಲ್ಲಿ ಶಿರಸಿಯ ಬಾಲ ಪ್ರತಿಭೆ ತುಳಸಿ ಹೆಗಡೆಯವರ 'ಯಕ್ಷ ನೃತ್ಯ' ಪ್ರೇಕ್ಷಕರ ಮನೆಗೆದ್ದರೆ, ನಂತರ ಮುಂಬೈನ ಸುಪ್ರಸಿದ್ಧ ಕಲಾವಿದರಿಂದ ನಡೆದ ಭಕ್ತಿಗೀತೆ ಹಾಗೂ ಹಿಂದಿ ಚಲನಚಿತ್ರ ಗೀತೆಗಳ ಮತ್ತು ಜನಪದ ಗೀತೆಗಳ ಗಾಯನ ಸುಮಧುರವಾಗಿ ಮೂಡಿ ಬಂತು.