ಮಂಡ್ಯ: ಜಿಲ್ಲೆಯಲ್ಲಿ ಮಹರ್ನಮಿ ಸಡಗರ, ಗುಡ್ಡೆ ಬಾಡಿನ ಘಮಲು
Mandya, Mandya | Sep 21, 2025 ಮಹಾಲಯದ ಅಮವಾಸ್ಯೆಯ ಪಿತೃಪಕ್ಷ ಮಾರ್ಲಮಿ ಹಬ್ಬದ ಹಿನ್ನೆಲೆ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಗುಡ್ಡೆಮಾಂಸದ ಘಮಲು ಜೋರಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಗುಡ್ಡೆ ಮಾಂಸಕ್ಕೆ ಜನರು ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗತಿಸಿರುವ ಪಿತೃಗಳಿಗೆ ಎಡೆ ಇಡಲು ಪ್ರತಿಯೊಬ್ಬರ ಮನೆಯಲ್ಲಿ ಮಾಂಸದೂಟದ ಎಡೆ ಇಡಲಾಗುತ್ತದೆ. ಈ ಹಿನ್ನಲೆಯಲ್ಲಿ ಗುಡ್ಡೆಬಾಡಿಗೆ ಬೇಡಿಕೆ ಹೆಚ್ಚಿದೆ. ಮಗನ ಮಾರಿಯಾದ್ರು ಮಾರ್ಲಮಿ ಹಬ್ಬ ಮಾಡು ಎನ್ನುವ ಗಾದೆ ಈ ಭಾಗದಲ್ಲಿ ಪ್ರತೀತಿಯಾಗಿದೆ. ಗುಡ್ಡೆ ಬಾಡು ಎಂದರೆ ಮೇಕೆ ಅಥವಾ ಕುರಿ ಕತ್ತರಿಸಿ ದೇಹದ ಎಲ್ಲ ಭಾಗಗಳನ್ನು ಸಮಾನವಾಗಿ ಹಂಚಿಕೊಳ್ಳುವುದಾಗಿದೆ.