ಚಡಚಣ: ಚಡಚಣ ಪಟ್ಟಣದಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿ
ಮನೆಯೊಂದರಲ್ಲಿ ಅಡುಗೆ ಸಿಲಿಂಡರ್ ಲೀಕ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ತಳವಾರ್ ಓಣಿಯಲ್ಲಿ ಸೋಮವಾರ ಸಾಯಂಕಾಲ 4ಗಂಟೆ ಗಂಟೆ ಸುಮಾರಿಗೆ ನಡೆದಿದೆ. ರಾಮಚಂದ್ರ ಹಟ್ಟಿ ಮನೆಯಲ್ಲಿ ಅಡುಗೆ ಸಿಲಿಂಡರ್ ಲೀಕ್ ಆಗಿ ಮನೆಯಲ್ಲಿನ ವಸ್ತುಗಳು ಹಾನಿಯಾಗಿದ್ದಾವೆ. ಆದ್ರೇ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಇನ್ನೂ ಅಡುಗೆ ಸಿಲಿಂಡರ್ ಲೀಕ್ನಿಂದ ಮನೆಯಲ್ಲಿ ಬೆಂಕಿ ಆವರಿಸಿದೆ, ತಕ್ಷಣವೇ ಮನೆ ಕುಟುಂಬಸ್ಥರು ಓಡಿ ಹೊರಗೆ ಬಂದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಸ್ಥಳೀಯರ ನೆರವಿನಿಂದ ಬೆಂಕಿಯನ್ನು ನಂದಿಸಲಾಯಿತ್ತು. ಅವಘಡದಿಂದ ಅಪಾರ ಪ್ರಮಾಣದ ಮನೆಯಲ್ಲಿನ ವಸ್ತುಗಳಿಗೆ ಹಾನಿ ಉಂಟಾಗಿದೆ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.