ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತರ ದಿಢೀರ್ ದಾಳಿ: ಯಾಕೆ ಗೋತ್ತಾ?
ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.. ಸೆಪ್ಟೆಂಬರ್ 15 ರಂದು ಮಧ್ಯಾನ 1.30 ಕ್ಕೆ ಲೋಕಾಯುಕ್ತ ಎಸ್ಸಿ ಸಿದ್ದರಾಜು ನೇತೃತ್ವದಲ್ಲಿ ಪಾಲಿಕೆ ವಲಯ1, ವಲಯ2, ವಲಯ 3 ಅಲ್ಲದೇ ಸ್ನೇಹ ಬಿಲ್ಡರ್ಸ್ ರಿಯಲ್ ಎಸ್ಟೇಟ್ ಸೆಂಟರ್, ಎಸ್.ಬಿ ಬಿಲ್ಡಿಂಗ್ ಪ್ಲಾನ್ ಸೆಂಟರ್ ಹಾಗೂ ಪಾಲಿಕೆ ಆವರಣದಲ್ಲಿನ ಝರಾಕ್ಸ್ ಸೆಂಟರ್ ಮೇಲೆ 30 ಕ್ಕೂ ಅಧಿಕ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಪಾಲಿಕೆಯಲ್ಲಿ ಇ ಖಾತಾ ಗೋಲ್ಮಾಲ್ ಭ್ರಷ್ಟಾಚಾರ ನಡೆದ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.