ಇ. ಡಿ ಇಲಾಖೆಯ ಹೆಸರು ಹೇಳಿ 12 ಲಕ್ಷ ರೂ. ವಂಚನೆ ಆರೋಪ : ಪ್ರಕರಣ ದಾಖಲು ಬೀದರ್ : ಮುಂಬೈಯ ಇ. ಡಿ ಇಲಾಖೆಯಿಂದ ಕರೆ ಮಾಡಿದ್ದೇವೆ ಎಂದು ಹೇಳಿ ವಾಟ್ಸಪ್ ಮೂಲಕ ಕರೆ ಮಾಡಿ 12 ಲಕ್ಷ ರೂ. ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಗುರುವಾರ ಪ್ರಕರಣ ದಾಖಲಾಗಿದೆ. ನಗರದ ಆನಂದನಗರದ ನಿವಾಸಿಯಾದ ಬಳಿರಾಮ್ ಕಾಂಬಳೆ ವಂಚನೆಗೋಳಗಾದ ನಿವೃತ್ತ ಕೇಂದ್ರ ಸರ್ಕಾರಿ ನೌಕರರಾಗಿದ್ದಾರೆ. ಇ. ಡಿ ಇಲಾಖೆಯಿಂದ ಕರೆ ಮಾಡುತಿದ್ದೇವೆ ಎಂದು ಹೇಳಿ, ನಿಮ್ಮ ಹೆಸರಿನಲ್ಲಿ ಖಾತೆ ಇದ್ದು 4 ಕೋಟಿ 70 ಲಕ್ಷ ರೂ. ವ್ಯವಹಾರ ಆಗಿದೆ. ಆ ಹಣವು ಮನಿಲಾಂಡ್ರಿಂಗ್ ಸಂಬಂಧಿಸಿದ್ದಾಗಿದೆ. ಖಾತೆ